Sunday 18 June 2017

ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ








(ವಿಶ್ವವಾಣಿ ಗುರುಪುರವಣಿಯಲ್ಲಿ ಪ್ರಕಟ: 13/04/2017)


-ನೋಡ ಬನ್ನಿ ನಮ್ಮೂರ ಸುಗ್ಗಿ ಕುಣಿತವ ಕಾಮನ ಸುಡುವ ಹಬ್ಬವ-

  'ಢಣಢಣ ಢಣ್ ಢಣಾಎಂದು ತಮಟೆಯ ಶಬ್ಧ ಕೇಳಿದರೆ ಇಂದಿಗೂ ಮೈ ರೋಮಾಂಚನಗೊಳ್ಳುತ್ತದೆನಾವೆಲ್ಲಾ ಚಿಕ್ಕವರಿದ್ದಾಗ  ರೀತಿ ತಮಟೆ ಶಬ್ಧಕೇಳಿದರೆ ಮಾಡುತ್ತಿರೋ ಕೆಲಸವನ್ನೆಲ್ಲಾ ಬದಿಗೊತ್ತಿ ಜಿಂಕೆಯಂತೆ ಜಿಗಿಯುತ್ತಾ ಓಡುತ್ತಿದ್ದೆವು.ಇದರೆಲ್ಲೇನೂ ವಿಶೇಷ ಅಂತೀರಾ?ಅದರಲ್ಲೇ ಇದೆ ವಿಶೇಷ.ಇದುನಮ್ಮೂರ ಸುಗ್ಗಿಯ ಸಂಭ್ರಮಕರಾವಳಿಯ ಕಣ್ಮಣಿಯಾಗಿ ಕಂಗೊಳಿಸುತ್ತಿರೋ ಕುಮಟಾ-ಉತ್ತರಕನ್ನಡ ಜಿಲ್ಲೆಯ ಸಾಂಸ್ಕೃತಿಕತಾಣಗಳಲ್ಲೊಂದು.ಕಡಲಿನಲೆಯಂತೆ ಆಕಾಶದೆತ್ತರಕ್ಕೆ ಚಿಮ್ಮಲು ಪ್ರಯತ್ನಿಸುತ್ತಿರುವ ಪ್ರತಿಭೆಗಳಿಗೆ ಭರವಿಲ್ಲ ಇಲ್ಲಿ.ಹಿಂದಿನಿಂದ ಬಂದ ಕಲೆ-ಸಂಸ್ಕೃತಿಗಳನ್ನುಉಳಿಸಿ ಬೆಳೆಸಲು ಇಂದಿನವರೂ ಶ್ರಮಿಸುತ್ತಿದ್ದಾರೆ.ಅಂತೆಯೇ ಕಾರ್ಯತತ್ಪರಾದವರಲ್ಲಿ 'ಹಾಲಕ್ಕಿ ಒಕ್ಕಲಿಗರೂಕೂಡ ಒಬ್ಬರು.ತಲೆತಲಾಂತರಗಳಿಂದಅವರಿಗೆ ಕೊಡುಗೆಯಾಗಿ ಬಂದಿರುವಂತಹ 'ಸುಗ್ಗಿ ಕುಣಿತ'ವನ್ನು ಅವರೆಂದೂ ಕೈ ಬಿಟ್ಟಿಲ್ಲ,ಉಳಿಸಿ ಬೆಳೆಸುತ್ತಿದಾರೆ.ಯಾರಿಂದ ಏನನ್ನೂ ಅಪೇಕ್ಷಿಸದೆ ಜನರಿಗೆಮುದನೀಡುವ ಇವರೂ ಸಂಸ್ಕೃತಿಯ ಪಾಲಕರೆಂದರೆ ತಪ್ಪಾಗಲಾರದೂ!!..
  ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವಾಸಿಸುವ  ಸಮುದಾಯದ ಜನರು ಕೂಲಿ ಕೆಲಸಕ್ಕಾಗಿ ಹೆಸರಾದವರು.ಘಟ್ಟದ ಮೇಲಿನ ಶಿರಸಿ,ಸಿದ್ಧಾಪುರದಲ್ಲಿನಜನರು ಇವರನ್ನು ತೋಟದಮನೆ ಕೆಲಸ,ಅಡಿಕೆ ಕೊಯ್ಯಲು ಮುಂತಾದ ಕೆಲಸಗಳಿಗಾಗಿ ಕರೆಸಿಕೊಳ್ಳುತ್ತಾರೆಇವರಲ್ಲಿನ ಬಲಿಷ್ಠತೆ,ನಂಬಿಕೆವಿಶ್ವಾಸಾರ್ಹಗುಣ,ಮಾಡುವ ಕೆಲಸದಲ್ಲಿನ ಅಚ್ಚುಕಟ್ಟುತನವೇ ಇದಕ್ಕೆ ಕಾರಣ.ಇತ್ತಿಚಿನ ದಿನಗಳಲ್ಲಿ ಶಾಲೆ ಕಲಿತು ಉದ್ಯೋಗ ಮಾಡುವವರೂ ಇದ್ದಾರೆ.ಆದರೆ ಅವರೂ ಕೂಡಅಧುನಿಕ ಸಂಸ್ಕೃತಿಗೆ ಮರುಳಾಗಿ ತಮ್ಮ ವಿಶಿಷ್ಠ ಸಂಸ್ಕೃತಿಯಾದ ಸುಗ್ಗಿ ಕುಣಿತವನ್ನು ಮರೆಯದೇ ಮುಂದುವರೆಸುತ್ತಿದ್ದಾರೇ ಎಂಬುದೇ ಗಮನಾರ್ಹಏಲಕ್ಕಿಹೋಳಿಗೆಯ ಘಮದ ಜೊತೆಗೆ ಹಾಲಕ್ಕಿ ಒಕ್ಕಲಿಗರ ಸುಗ್ಗು ಕುಣಿತದ ಸಂಭ್ರಮ ಬೆರೆತರೆ,ಆಹಾಅದರ ಮಜವೇ ಬೇರೆ,ವರ್ಣನೆಗೆ ನಿಲುಕದ್ದು.
  ಹೋಳಿ ಹುಣ್ಣಿಮೆಗಿಂತ ಮುಂಚಿತವಾಗಿ ಬರುವ ದಶಮಿಯಂದು  ಒಕ್ಕಲಿಗ ಸಮುದಾಯದವರು ಹಬ್ಬಕ್ಕೆ ಅವರ ಶಾಸ್ತ್ರದಂತೆ ಚಾಲನೆ ನೀಡುತ್ತಾರೆ.ಬೀರಪ್ಪದೇವರ(ಅವರ ಸಮುದಾಯದ ದೇವರುಪೂಜೆ ಮಾಡಿ 'ಊರಗೌಡ' (ಸಮುದಾಯದ ನಾಯಕಹಬ್ಬಕ್ಕೆ ಶುಭಾರಂಭವನ್ನೀಯುತ್ತಾನೆ. 'ಬುಧವಂತಎಂಬಪಟ್ಟಹೊತ್ತವನು ಊರಿಗೆಲ್ಲಾ ಸುಗ್ಗಿ ಪ್ರಾರಂಭವಾದುದರ ಕುರಿತು ಹೇಳುತ್ತಾನೆ.ಇನ್ನು 'ಕೋಲಕಾರ' (ಕಾಮದಹನಕ್ಕೆ ಕೆಂಡ ತಯಾರಿ ಮಾಡುವವಎಂಬುವವನುಪರಂಪರೆಯಾಗಿ ಬಂದ ಬೆತ್ತದೊಡನೆ ಊರೂರಿಗೆ ಹೋಗಿ ವೀಳ್ಯದೆಲೆ ಕೊಟ್ಟು ಸುಗ್ಗಿಯ ಆಗಮನದ ಬಗ್ಗೆ ತಿಳಿಸಿಬರುತ್ತಾನೆ. ಸುಗ್ಗಿಯಲ್ಲಿ ಎರಡುವಿಧವಿದೆ,ಮೊದಲನೆಯದು ಹಿರಿಸುಗ್ಗಿ,ಎರಡನೇಯದು ಕಿರಿಸುಗ್ಗಿ(ಬೋಳಸುಗ್ಗಿ). ಹಿರಿಸುಗ್ಗಿಯಲ್ಲಿ  ವಿಶಿಷ್ಠವಾಗಿ ವಿನ್ಯಾಸಗೊಂಡ ಪಗಡೆ,ಬೆಂಡಿನತುರಾಯಿ,ನವಿಲುಗರಿಯ ಕುಂಚಸಿಕ್ಕಿಸಿ,ತರೇವಾರಿ ವೇಷತೊಟ್ಟು 'ಬೋ ಹೋ ಸೋ.. ಛೋ ಹೋ ಹೋಯ್ಎನ್ನುತ್ತಾ ,ತಮ್ಮದೇ ಆದ ಪ್ರಾಸ ಹಾಕಿ,ಅವರದ್ದೇಧಾಟಿಯಲ್ಲಿ ಹಾಡಿಕೊಂಡು ಕುಣಿಯುತ್ತಾರೆಅದೇ ಕಿರಿಸುಗ್ಗಿಯಲ್ಲಿ ತಲೆಗೊಂದು ರುಮಾಲು ಸುತ್ತಿ,ತಮ್ಮ ವಾದ್ಯದೊಡನೆ ಕೇವಲ ತಮ್ಮ ಸಮುದಾಯದಮನೆಗಷ್ಟೇ ಹೋಗುತ್ತಾರೆ ಎರಡೂ ಸುಗ್ಗಿಯನ್ನು ಅವರ ಬೀರಪ್ಪ ದೇವರಿಗಾಗೇ ಮಾಡುತ್ತಾರೆಇನ್ನೂ ಕೆಲವರ ಪ್ರಕಾರ ಸಣ್ಣ ದೇವರಿಗಾಗಿ ಕಿರಿಸುಗ್ಗಿ,ದೊಡ್ಡದೇವರಿಗಾಗಿ  ವರ್ಷಕ್ಕೊಂದು ಸುಗ್ಗಿಯನ್ನು ಕುಣಿದು ಅವರ ಪರಂಪರೆಯನ್ನು ಮುಂದುವರೆಸುತ್ತಾರೆಊರೂರು ಅಲೆದು ಮನದಣಿಯೇ ಕುಣಿದರೂ ಅವರಿಗೆದಣಿವಿಲ್ಲ.ಮೊದಲ ದಿನದಿಂದ ಕೊನೆಯತನಕ ಅದೇ ಉತ್ಸಾಹ,ಅದೇ ಶಕ್ತಿ ಚೈತನ್ಯವನ್ನ ನಿಜಕ್ಕೂ ಮೆಚ್ಚಲೇಬೇಕು.
ಗ್ರಾಮದಲ್ಲಿ ಹಿಂದೂ ಹಾಲಕ್ಕಿ ಒಕ್ಕಲಿಗರ ಒಕ್ಕೂಟದಿಂದ ಸಭೆಕರೆದು ಕರ್ಚುವೆಚ್ಚದ ಬಗ್ಗೆ ನಿರ್ಣಯಿಸಲಾಗುತ್ತದೆ.ಪ್ರತಿ ಮನೆಗೆ ಸರಿ ಸುಮಾರು ೧೦೦-೨೦೦ರೂಪಾಯಿಯಂತೆ ಖರ್ಚಾಗಬಹುದು ಎನ್ನುತ್ತಾರೆದೇವಸ್ಥಾನಗಳಿಗೆ,ಮನೆಯಿಂದ ಮನೆಗೆ,ಊರಿಂದೂರಿಗೆ ತೆರಳಿ,ವೇಷಕಟ್ಟಿ ನರ್ತಿಸಿ ನೋಡುಗರಮನಸೂರೆಗೊಳ್ಳುತ್ತಾರೆ.ಪೊಗಡೆ,ಬಿಂಗು,ಕೋರು,ವಿಭಿನ್ನ ವಸ್ತ್ರ ಮುಂತಾದ ಕಲಾಕೃತಿಗಳು,ಬಣ್ಣ(ಮೇಕಪ್),ಕಾಲ್ಗೆಜ್ಜೆ ಮುಂತಾದವುಗಳ ವೆಚ್ಚ ಎಂಟು ದಿನಕ್ಕೆಸುಮಾರು ೨೦-೨೫ ಸಾವಿರ ರೂಪಾಯಿಗಳಷ್ಟಾಗಿರುತ್ತದೆತಮ್ಮದೇ ದುಡಿಮೆಯ ಹಣವನ್ನು ಕರ್ಚುಮಾಡಿ,ಯಾರಿಂದ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇಮನೆಯವರು ಕೊಡುವ ಅಕ್ಕಿ-ಕಾಯಿ-ದುಡ್ಡು ಪ್ರೀತಿಯಿಂದ ತೆಗೆದುಕೊಂಡು ಮುನ್ನಡೆಯುತ್ತಾರೆ.ರಾತ್ರಿ ೧೨ಘಂಟೆಗೂ ಮಧ್ಯಾನ್ಹ ೧೨ರ ಉತ್ಸಾಹನೋವನ್ನುಂಡಾದ್ರೂ ನಗಿಸಬೇಕೆಂಬ ಮಾತಿನಂತೆ ಎಲ್ಲರಿಗೂ ಸಂತಸವನ್ನೇ ನೀಡುವ ಇವರು ನನಗೆ ಯಾವಾಗ್ಲೂ ಅಚ್ಚರಿಯೆನಿಸುತ್ತಾರೆ.
  ಹೋಳಿ ಹುಣ್ಣಿಮೆಯ ಹಿಂದಿನ ದಿನ ಕೂಟದ ಯಜಮಾನನ ಮನೆಯ ತುಳಸಿಕಟ್ಟೆಯ ಮುಂದೆ ಕಮಿ(ಕಣಿಹೇಳಲಾಗುತ್ತದೆ.'ಹರಿವಿನ್ ಎಂಬುದು ಗುರುವಿನ್ಗುಲಗಂಜಿಎಂಬುದು ಸುಗ್ಗಿಯಲ್ಲಿ ಪ್ರಪ್ರಥಮವಾಗಿ ಬರುವ ಕಮಿ(ಕಣಿ) ಪದವಾಗಿದೆ.ಇದನ್ನು ಸೀತಮ್ಮನವರ ಕಮಿ ಎಂದೂ ಕರೆಯಲಾಗುವುದು.ಇದನ್ನುಸೀತಾಮಾತೆ ರಾಮನಿಗಾಗಿ ಹಾಡುತ್ತಿದ್ದ ಪದ್ಯವೆಂದೂ ಪ್ರಚಲಿತದಲ್ಲಿದೆ.ಸುಮಾರು ಒಂದು ತಾಸಿನವರೆಗೆ ಹಾಡಲಾಗುವ  ಸೀತೆ ಕಮಿ(ಕಣಿ)ಯನ್ನು ಸುಗ್ಗಿಕುಣಿತದ ಆರಂಭದಲ್ಲೂ ಹಾಡಲಾಗುವುದು.
  ಚಿನ್ನದಿಂದ ಮೈತೊಳೆದು ಬಂದಂತೆ ಕಾಣುವ ಚಂದಿರ ಬಾನಂಚಲಿ ಮೆಲ್ಲನವತರಿಸಿದ ರಾತ್ರಿಯದು.ಎಲ್ಲರೂ ಅದುಮಿಟ್ಟ ಭಕ್ತಿಭಾವವನ್ನು ಭೊರ್ಗರೆದುತೆಗೆದಿಡುವ ಫಾಲ್ಗುಣ ಶುಕ್ಲ ಪೌರ್ಣಮಿಯ ಆಗಮನವಾಗುವ ಶುಭದಿನಕ್ಕಾಗಿ ಊರಮಂದಿಯೆಲ್ಲಾ ಕಾತರಿಸಿ ಕಾಯುತ್ತಾರೆಹಗಲಿಡೀ ಬಣ್ಣವೆರೆಚಿಓಕುಳಿಯಾಡಿನಂತರ ಕಾಮದಹನಕ್ಕಾಗಿ ತಯಾರಿ ಭರದಿಂದ ನಡೆಯುತ್ತದೆ.ಮುಸ್ಸಂಜೆ ಸೂರ್ಯ ಮನೆಗೋಡುವುದೇ ತಡ,ಇತ್ತ ಯಜಮಾನನತುಳಸೀವನದ ಬಳಿ ಜನಜಂಗುಳಿ.ಕಾಮದಹನಕ್ಕೂ ಮೊದಲು  ತುಳಸಿವನಕ್ಕೆ ಯಜಮಾನ ಪೂಜೆಮಾಡಿದ ಮೇಲೆ ತುರಾಯಿ ಕಟ್ಟಿ ಕೊನೆಯ ಸುಗ್ಗುಕುಣಿತವ ಕುಣಿದು ಮಂಗಳ ಹಾಡುತ್ತಾರೆ.ನೋಡನೋಡುತ್ತಿದ್ದಂತೆ ಯುವಕ ವೃದ್ಧರ ಬೇಧವಿಲ್ಲದೇ ಆವೇಶಭರಿತರಾಗಿ ಕುಣಿಯುತ್ತಾರೆ,ವಿಚಿತ್ರವಾಗಿ ಏನೇನೋಮಾತನಾಡತೊಡಗುತ್ತಾರೆಇದಕ್ಕೆ ಅವರು ಹೇಳುವುದು 'ದೇವ್ರು ಮೈಮೇಲ್ ಬಂತುಎಂದು.ಬ್ರಹ್ಮದೇವರ ಪೂಜೆ ಮುಗಿದು ಯಜಮಾನ ಅಪ್ಪಣೆಕೊಡುವುದೊಂದೇ ತಡ ಅಬಾಲವೃದ್ಧರೆಲ್ಲಾ 'ಹೊಂಯ್ಕ್ಯೋ' (ಹೋ ಕಾಮಎನ್ನುತ್ತಾ ಒಂದು ಗುಡ್ಡದೆಡೆಗೆ ಓಡುತ್ತಾರೆ.
  ಇತ್ತ ಕರಿದೇವರ ಗುಡ್ಡ(ಅವರ ಬೀರಪ್ಪ ದೇವರ ವಿಗ್ರಹವಿರುವ ಗುಡ್ಡ)ದಲ್ಲಿ ಕೋಲಕಾರ ಪಟ್ಟ ಹೊತ್ತವನು ಮೊದಲೇ  ೧೦-೧೫ ಕ್ವಿಂಟಾಲ್ ಸೌದೆಯ ಕೆಂಡವನ್ನುಸಿದ್ಧಪಡಿಸಿಟ್ಟುಕೊಳ್ಳುತ್ತಾನೆ.ಇವರ ಕೆಂಡಹಾಯುವುದನ್ನು (ಕಾಮದಹನದ ಒಂದು ವಿಧನೋಡಲು ಎಲ್ಲೆಲ್ಲಿಂದಲೋ ಜನಜಾತೆ ನೆರೆದಿರುತ್ತದೆಕೆಂಡಸಿದ್ಧಪಡಿಸಿದ ಕೋಲಕಾರ ಪಟಾಕಿ ಹೊಡೆದು,ಆಚೆ ಗುಡ್ಡದಲ್ಲಿರುವವರಿಗೆ ಸೂಚನೆ ಕೊಡುತ್ತಾನೆ.ಕ್ಷಣಮಾತ್ರದಲ್ಲಿ ಬಾಣದಂತೆ ಚಿಮ್ಮಿ ಬಂದು ಮೂರು ಸಾರಿಕೆಂಡವನ್ನು ಹಾಯ್ದುಹೋಗುತ್ತಾರೆ.ನೋಡುಗರ ಮೈ ಜುಮ್ಮೆಂದು ಕಂಪನವಾಗುತ್ತುರುವಾಗಲೇ,ಕೆಂಡ ಹಾಯುವವರು ಆರಾಮಾಗಿ ದೇವರ ಪೂಜೆಗೆ ಕೈಮುಗಿದುನಿಂತಿರುತ್ತಾರೆ.'ಕೆಂಡ ಹಾಯುವಾಗ ಬೆಂಕಿ ಬಿಸಿನೇ ನಮ್ಗಾಗುದಿಲ್ಲ.ತಂಪನ್ ನೀರಲ್ಲಿ ಹೋದಾಂಗ್ ಆತೀತು.ಇದ್ಕೆ ನಮ್ ಬೀರಪ್ಪ ದ್ಯಾವ್ರೆ ಕಾರ್ಣಎಂದು ಅವರುಸ್ಪಷ್ಟಿಕರಣವೀಯುತ್ತಾರೆ.ಅವರ ಆದೇಶಪೂರಿತ ಭಕ್ತಿ,ಭಯವಿಲ್ಲದ ನಡೆ,ಅಪಾರ ಆತ್ಮವಿಶ್ವಾಸವೇ ಇದಕ್ಕೆ ಕಾರಣವೆಂದು ನಾವೆಂದುಕೊಳ್ಳೊಣ.ಅದೆಲ್ಲವಆಚೆಯಿರಿಸಿ ನೋಡಿದಾಗ ನಮಗೆ ಕಾಣುವುದು ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರೋ ಅವರ ಗುಣ,ಅಭಿನಂದನಾರ್ಹ.
 ಇದು ಕೇವಲ ನಮ್ಮೂರು ಗುಡಬಳ್ಳಿ ಊರಿನ ಒಕ್ಕಲಿಗರ ಸುಗ್ಗಿಯಲ್ಲ.ಬದಲಾಗಿ ಉತ್ತರಕನ್ನಡ ಜಿಲ್ಲೆಯ ಸಂಸ್ಕೃತಿಯ ಕೀರ್ತಿಕಿರಿಟದಲ್ಲಿ ಕಂಗೊಳಿಸುತ್ತಿರೋಪುಟ್ಟಗರಿ. 'ಕುಣಿಸಲು ನೀನು,ಕುಣಿವೆನು ನಾನುಎನ್ನುವಂತೆ  ದೇವರಲ್ಲಿ ಅಪರಿಮಿತ ನಂಬಿಕೆಯನ್ನಿಟ್ಟ  ಮುಗ್ಧಜನರೆಂದೂ ತಮ್ಮ ಸಂಪ್ರದಾಯ ಬಿಡದಿರಲಿಅದನ್ನು ಬೆಳೆಸಿ ಮುನ್ನಡೆಸಲು  ಭಗವಂತ ಶಕ್ತಿಯನ್ನೀಯಲಿ ಎಂದಾಶಿಸುತ್ತೇನೆಓದುಗರೇನಿಮಗೂ  ಸುಗ್ಗಿ ಕುಣಿತ,ಕೆಂಡ ಹಾಯುವುದನ್ನು ನೋಡಬೇಕುಅನಿಸುತ್ತಿದೆಯಾಮುಂದಿನ ವರ್ಷ ತಪ್ಪದೇ ಬನ್ನಿ,ನಮ್ಮೂರು ತಮ್ಮ ಸ್ವಾಗತಕ್ಕೆ ಸದಾ ಸಿದ್ಧ..
 
ಲೇಖನಶುಭಶ್ರೀ ಭಟ್ಟ,ಬೆಂಗಳೂರು
ಫೊಟೋ ಕೃಪೆಗಜಾನನ ಹೆಗಡೆ,ವಿಸ್ಮಯ ಟಿ.ವಿ.ಕುಮಟಾ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...