Friday 28 November 2014

ಮುಸ್ಸಂಜೆ ಮಾತು

ಬಾಲ್ಯದ ಬಾಲ ಸೂರ್ಯ 
ಬಾಳಿಂದ ಬದಿಸರಿದಾಯ್ತು 
ಯೌವನದ ಯುವಸೂರ್ಯ 
ಮರೆಯಾಗಿ ಸಮಯವಾಯ್ತು 
ಮುಸ್ಸಂಜೆಯ ಮುಪ್ಪು ಸೂರ್ಯ 
ನೆತ್ತಿಗೆ ಹತ್ತಿ ಕುಳಿತಿದ್ದಾಯ್ತು || 
  ನೆತ್ತಿಗೇರಿದ ಮುಪ್ಪನ್ನು 
ಸಾವೆಂಬ ಕಗ್ಗತ್ತಲು 
ಆವರಿಸೋದು ತಡವಿಲ್ಲ 
ಮುಸ್ಸಂಜೆಯ ಮಾತಿಗಿಲ್ಲಿ 
ಕಿವಿಯಾಗೋಕೆ ಯಾರಿಲ್ಲ ||






























ನಿಮ್ಮ,

ಶುಭಶ್ರೀ ಭಟ್ಟ

ಮರಳಿ ಬಾ ಗೂಡಿಗೆ

ಪ್ರೀತಿಯ ಗರ್ಭದೊಳಗೆ     
ಪ್ರೇಮದ ಮೊಳಕೆ       
ಎದೆಯಲ್ಲಿ ನವನವೀನ ಪುಳಕ 
ನವಮಾಸವು ತುಂಬಲೆಂಬ ತವಕ  ||
ನಿನ್ನ ಹೂನಗುವಿನಲೆಯಲಿ ನಾ ನಲಿವ ನಲಿವಾದರೆ      
ನಿನ್ನ ಅಳುವಿನಬ್ಬರಕ್ಕೆ ನಾ ಗಾಳಕ್ಕೆ ಸಿಕ್ಕ ಮೀನು.... 
ನೀ ಅಂಬೆಗಾಲಿಟ್ಟು ನನ್ನೆಡೆ ಬರುತ್ತಿರೆ, 
 ನನ್ನಲ್ಲೊಡುತ್ತಿತ್ತು ಬಂಗಾರದ ಜಿಂಕೆ   
ನಿನ್ನ ಮುದ್ದು ಮಾತಿನ ಲಲ್ಲೆಗೆ 
ಮೂಡುತ್ತಿತ್ತು ಹೊಸ ಲವಲವಿಕೆ || 
ಇಂತು ನನ್ನ ಜೀವಕ್ಕೆ ಜೀವವಾದ ನೀನು 
 ಹೋದದ್ಯಾಕೆ ನನ್ನಿಂದ ದೂರ,  
ಈ ಅಮ್ಮನ ಪ್ರೀತಿಗಿಂತ ಹತ್ತಿರವಾಯ್ತೆ 
ನಿನಗೆ ಆ ದೇವನ ಸನಿಹ|
ಮರಳಿ ಬಾ ನನ್ನ ಕಂದ 
ನನ್ನ ಬಾಳಿಗೆ ಬೆಳಕಾಗಿ
 ಜೀವನದ ಉಸಿರಾಗ ಮರಳಿ ಬಾ ನನ್ನ ಕಂದ 
ಆದರೆ ಅತಿಥಿಯಾಗಲ್ಲ , ಶಾಶ್ವತವಾಗಿ 
 ಮರಳಿ ಬಾ ನನ್ನ ಕಂದ ನನ್ನೆದೆಯ ಗೂಡಿಗೆ 
ನಿನ್ನಮ್ಮನ ಗರ್ಭದ ಗೂಡಿಗೆ ||


ನಿಮ್ಮ,
ಶುಭಶ್ರೀ ಭಟ್ಟ

Monday 8 September 2014

ಗುರು-ಗ್ರಹಣ

ಅವರ ಮನ ಹೂವಿನಂತದ್ದು,
ಅವರ ಮಮತೆ ಅಮ್ಮನಂತದ್ದು,
ಅವರ ಪ್ರೀತಿ ಕಲ್ಮಶವಿಲ್ಲದ್ದು,
ಅವರ ನಗು ಹಸುಗೂಸಿಂದ್ದು,
ಇಂತಿಪ್ಪ ನಮ್ಮ ಗುರುವಿಗೆ,
ಕವಿಯಿತು ಗ್ರಹಣದ ಛಾಯೆ||
ಅದು ಚಂದ್ರಗ್ರಹಣವೋ,
ಅಥವಾ ಸೂರ್ಯಗ್ರಹಣವೋ,
ಒಟ್ಟಿನಲ್ಲಿ ಗ್ರಹಣ,ಗುರು-ಗ್ರಹಣ,
ಅಂದರೆ ಶಾಶ್ವತವಲ್ಲದ್ದು||
ಪ್ರಭು ರಾಮಚಂದ್ರನಿಗೂ
ತಪ್ಪಲಿಲ್ಲ ವನವಾಸದ ಬಿಸಿ,
ಮಾತೆ ಸೀತಾದೇವಿಗೂ
ತಾಕದಿರಲಿಲ್ಲ ಅಪವಾದದ ಛಾಯೆ,
ಅಂತೆಯೇ ನಮ್ಮ ರಾಘವರಿಗೂ
ಸೋಕಿದೆ ಅಪಮಾನದ ಸೋಂಕು||
ಅಂಜದಿರಿ,ಅಳುಕದಿರಿ ಗುರು-ಭಕ್ತವೃಂದವೇ,
ಗ್ರಹಣ ಕರಗಲು,ಸೋಂಕು ಮಾಗಲು
ಇನ್ನಿಲ್ಲ ಬಹುದಿನ||
ಅಮೃತವನ್ನೀಯುವ ತಾಯಿಗೆ
ವಿಷವುಣಬಡಿಸಿದ ದಿವಾಕರನ ಲತೆಗೆ
ಕಾದಿದೆ ಪಶ್ಚಾತ್ತಾಪವಿಲ್ಲದ ಶಿಕ್ಷೆ,
ಆಗಲಿದೆ ಶ್ರೀರಾಮನಿಂದಲೇ
ಸಂಸ್ಠಾನದ ಶ್ರೀರಕ್ಷೆ
ನಮಗಿರಲಿ ಆ ಸುದಿನದ ನೀರೀಕ್ಷೆ||

ನಿಮ್ಮ,
ಶುಭಶ್ರೀ

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...