Friday 28 November 2014

ಮುಸ್ಸಂಜೆ ಮಾತು

ಬಾಲ್ಯದ ಬಾಲ ಸೂರ್ಯ 
ಬಾಳಿಂದ ಬದಿಸರಿದಾಯ್ತು 
ಯೌವನದ ಯುವಸೂರ್ಯ 
ಮರೆಯಾಗಿ ಸಮಯವಾಯ್ತು 
ಮುಸ್ಸಂಜೆಯ ಮುಪ್ಪು ಸೂರ್ಯ 
ನೆತ್ತಿಗೆ ಹತ್ತಿ ಕುಳಿತಿದ್ದಾಯ್ತು || 
  ನೆತ್ತಿಗೇರಿದ ಮುಪ್ಪನ್ನು 
ಸಾವೆಂಬ ಕಗ್ಗತ್ತಲು 
ಆವರಿಸೋದು ತಡವಿಲ್ಲ 
ಮುಸ್ಸಂಜೆಯ ಮಾತಿಗಿಲ್ಲಿ 
ಕಿವಿಯಾಗೋಕೆ ಯಾರಿಲ್ಲ ||






























ನಿಮ್ಮ,

ಶುಭಶ್ರೀ ಭಟ್ಟ

2 comments:

chetanaahegde said...

ವ್ಹಾ ವ್ಹಾ ವ್ಹಾ!

Shubhashree Bhat said...

Thanks dear :) :)

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...