ಅವರ ಮನ ಹೂವಿನಂತದ್ದು,
ಅವರ ಮಮತೆ ಅಮ್ಮನಂತದ್ದು,
ಅವರ ಪ್ರೀತಿ ಕಲ್ಮಶವಿಲ್ಲದ್ದು,
ಅವರ ನಗು ಹಸುಗೂಸಿಂದ್ದು,
ಇಂತಿಪ್ಪ ನಮ್ಮ ಗುರುವಿಗೆ,
ಕವಿಯಿತು ಗ್ರಹಣದ ಛಾಯೆ||
ಅದು ಚಂದ್ರಗ್ರಹಣವೋ,
ಅಥವಾ ಸೂರ್ಯಗ್ರಹಣವೋ,
ಒಟ್ಟಿನಲ್ಲಿ ಗ್ರಹಣ,ಗುರು-ಗ್ರಹಣ,
ಅಂದರೆ ಶಾಶ್ವತವಲ್ಲದ್ದು||
ಪ್ರಭು ರಾಮಚಂದ್ರನಿಗೂ
ತಪ್ಪಲಿಲ್ಲ ವನವಾಸದ ಬಿಸಿ,
ಮಾತೆ ಸೀತಾದೇವಿಗೂ
ತಾಕದಿರಲಿಲ್ಲ ಅಪವಾದದ ಛಾಯೆ,
ಅಂತೆಯೇ ನಮ್ಮ ರಾಘವರಿಗೂ
ಸೋಕಿದೆ ಅಪಮಾನದ ಸೋಂಕು||
ಅಂಜದಿರಿ,ಅಳುಕದಿರಿ ಗುರು-ಭಕ್ತವೃಂದವೇ,
ಗ್ರಹಣ ಕರಗಲು,ಸೋಂಕು ಮಾಗಲು
ಇನ್ನಿಲ್ಲ ಬಹುದಿನ||
ಅಮೃತವನ್ನೀಯುವ ತಾಯಿಗೆ
ವಿಷವುಣಬಡಿಸಿದ ದಿವಾಕರನ ಲತೆಗೆ
ಕಾದಿದೆ ಪಶ್ಚಾತ್ತಾಪವಿಲ್ಲದ ಶಿಕ್ಷೆ,
ಆಗಲಿದೆ ಶ್ರೀರಾಮನಿಂದಲೇ
ಸಂಸ್ಠಾನದ ಶ್ರೀರಕ್ಷೆ
ನಮಗಿರಲಿ ಆ ಸುದಿನದ ನೀರೀಕ್ಷೆ||
ನಿಮ್ಮ,
ಶುಭಶ್ರೀ
ಅವರ ಮಮತೆ ಅಮ್ಮನಂತದ್ದು,
ಅವರ ಪ್ರೀತಿ ಕಲ್ಮಶವಿಲ್ಲದ್ದು,
ಅವರ ನಗು ಹಸುಗೂಸಿಂದ್ದು,
ಇಂತಿಪ್ಪ ನಮ್ಮ ಗುರುವಿಗೆ,
ಕವಿಯಿತು ಗ್ರಹಣದ ಛಾಯೆ||
ಅದು ಚಂದ್ರಗ್ರಹಣವೋ,
ಅಥವಾ ಸೂರ್ಯಗ್ರಹಣವೋ,
ಒಟ್ಟಿನಲ್ಲಿ ಗ್ರಹಣ,ಗುರು-ಗ್ರಹಣ,
ಅಂದರೆ ಶಾಶ್ವತವಲ್ಲದ್ದು||
ಪ್ರಭು ರಾಮಚಂದ್ರನಿಗೂ
ತಪ್ಪಲಿಲ್ಲ ವನವಾಸದ ಬಿಸಿ,
ಮಾತೆ ಸೀತಾದೇವಿಗೂ
ತಾಕದಿರಲಿಲ್ಲ ಅಪವಾದದ ಛಾಯೆ,
ಅಂತೆಯೇ ನಮ್ಮ ರಾಘವರಿಗೂ
ಸೋಕಿದೆ ಅಪಮಾನದ ಸೋಂಕು||
ಅಂಜದಿರಿ,ಅಳುಕದಿರಿ ಗುರು-ಭಕ್ತವೃಂದವೇ,
ಗ್ರಹಣ ಕರಗಲು,ಸೋಂಕು ಮಾಗಲು
ಇನ್ನಿಲ್ಲ ಬಹುದಿನ||
ಅಮೃತವನ್ನೀಯುವ ತಾಯಿಗೆ
ವಿಷವುಣಬಡಿಸಿದ ದಿವಾಕರನ ಲತೆಗೆ
ಕಾದಿದೆ ಪಶ್ಚಾತ್ತಾಪವಿಲ್ಲದ ಶಿಕ್ಷೆ,
ಆಗಲಿದೆ ಶ್ರೀರಾಮನಿಂದಲೇ
ಸಂಸ್ಠಾನದ ಶ್ರೀರಕ್ಷೆ
ನಮಗಿರಲಿ ಆ ಸುದಿನದ ನೀರೀಕ್ಷೆ||
ನಿಮ್ಮ,
ಶುಭಶ್ರೀ