Tuesday 16 May 2017

 ಕೊನೆಹನಿ

(ಪ್ರತಿಲಿಪಿ ಕನ್ನಡದಲ್ಲಿ ಪ್ರಕಟವಾದ ಕಥೆ)




  'ಅಯ್ಯೋ ದೇವ್ರೇ, ಮಾನ್ಸಿಗೆ ಹೇಗೆ ಹೇಳಲಿ?ಅವನ ಬಗ್ಗೆ ಏನೇನೋ ಕನ್ಸು ಕಟ್ಕೊಂಡು ಕಾದು ಕುಳಿತಿರೊಇವಳಿಗೆ ನಿನ್ನವ ಇನ್ನಿಲ್ಲವೆಂದು ಯಾವ್ ಬಾಯಲ್ಲಿ ಹೇಳಲಿ?ನಿನ್ನ ಹುಡ್ಕೊಂಡು ಕೇರಳಕ್ಕೆ ಬರ್ತಿರುವಾಗಆಕ್ಸಿಡೆಂಟ್ ಆಯ್ತು ಅಂತ ಹೇಗಪ್ಪಾ ಹೇಳಲಿಅಂತ ಹಲಬುತ್ತಾ ಓಡೊಡಿ ಬರ್ತಿದ್ದ ಕಾವ್ಯ,ರೂಮಲ್ಲಿಕಾಲಿಟ್ಟೊಡನೆ ಶಿಲೆಯಂತಾದಳು.ಅದೇ ಮಾಸದ ನಗು ಹೊತ್ತು,ಕೈಯಲ್ಲೊಂದು ಪತ್ರವನ್ಹಿಡಿದು ಚಿರನಿದ್ರೆಗೆಜಾರಿದ ಗೆಳತಿಯ ಕಂಡು ನಿಂತಲ್ಲೇ ಸ್ತಂಭವಾದಳು ಕಾವ್ಯ.ಮೆಲ್ಲ ಸಾವರಿಸಿಕೊಂಡು ಪತ್ರವ ತೆಗೆದುಕೊಂಡುಕಣ್ಣಾಡಿಸತೊಡಗಿದಳು..
ಹೇ ನನ್ನ ಹುಡುಗಾ!
  ನೀನು ಇಲ್ಲಿಗೆ ಬರ್ತಿದೀಯಾಂತ ಕ್ಷಣಕ್ಕೆ ಮೊದಲು ಗೊತ್ತಾಯ್ತು ಕಣೋ.ತುಂಬಾ ದಿನದ ನಂತರ ನಿನ್ನನ್ನಕಣ್ತುಂಬಿಕೊಳ್ಳಬಹುದು,ನಿನ್ನ ಮಡಿಲಲ್ಲೇ ಕೊನೆಯುಸಿರು ಬಿಡುವಾಸೆ ಕಣೋ ನನ್ನ ಜೀವ.ಆದರೂ ಎದೆಯಲ್ಲೆಲ್ಲಾಉರಿ,ಹೇಳಲಾಗದ ಸಂಕಟ,ಸರಿಯಾಗಿ ಉಸಿರಾಡಲೂ ಸಾಧ್ಯವಾಗ್ತಿಲ್ಲ ನನಗೆನೀನು ಬರುವ ತನಕಜೀವವಿಲ್ಲದರೇ  ಪತ್ರವನ್ನು ಓದು.ಯಾಕೆ ಹೀಗೆ ಹೇಡಿತರಹ ಯಾಕಾಡ್ದ್ಯೇ ಅನ್ನಬೇಡ್ವೋ.ನನಗೆ  ಪರಿಯಒಂಟಿತನಏಕಾಂಗಿಭಾವ ಏಂದೂ ಕಾಡಿರಲಿಲ್ಲ,ನಿನ್ನ ಬಿಟ್ಟು ಬೇರೆಯವರ ಜೊತೆ ಮದುವೆಯಾಗಿ ಬದುಕಲುನನ್ನಿಂದಾಗಲಿಲ್ಲ ಕಣೋಮನಸ್ಸನ್ನ ನಿನಗೆ ಕೊಟ್ಟು,ದೇಹವನ್ನು ಇನ್ನೊಬ್ಬರಿಗೆ ಕೊಟ್ಟು ವ್ಯಭಿಚಾರಿಣಿ ತರಹಬದುಕುವುದು ನನ್ನಿಂದ ಸಾಧ್ಯವಿರಲಿಲ್ಲ ಗೆಳೆಯ.
  ನೀನೊಬ್ಬನೇ ನನ್ನ ಪ್ರೀತಿಸಿಲ್ಲ ಗೆಳೆಯಾ,ನಿನಗಿಂತ ಮುಂಚೆ ನಾನಿನಗೆ ಮನಸೋತಿದ್ದೆ.ನಿನ್ನ ಮನದಮೂಲೆಯಲ್ಲಿದ್ದ ನಿನ್ನ ಒಳ್ಳೆತನವೇ ನನ್ನ ಮೇಲಣ ಪ್ರೀತಿನೇ ನಿನ್ನ ಬದಲಾಯಿಸಿದ್ದು ಹೊರತು ನಾನಲ್ಲ.ಎಲ್ಲಾದಕ್ಕೂಒಂದು ಪ್ರೇರಣೆ ಬೇಕಿತ್ತು ನಿನಗೆ,ಅದು ನಾನಾಗಿದ್ದೆ ಅಷ್ಟೇ.ನಿನ್ನ ಬೆಳವಣಿಗೆಗೆ ನಾನು ಮಾಡುವ ಪ್ರೀತಿಅಡ್ಡಿಯಾಗಬಾರದೆಂದು,ನನ್ನ ಪ್ರೀತಿಯ ವಿಷಯ  ನಿನಗೇ ತಿಳಿಸಲೇ ಇಲ್ಲ.ದೂರದ ಕೇರಳದಲ್ಲಿದ್ದುಕೊಂಡೆ ನಿನ್ನಪ್ರತೀ ಬೆಳವಣಿಗೆಯನ್ನು ನೋಡಿ ಖುಷಿ ಪಡ್ತಿದ್ದೆನೀನು ಜೊತೆಗಿಲ್ಲ ಅನ್ನೋ ಕೊರಗು ಬಿಟ್ರೆ ನಾನುಸುಖವಾಗಿದ್ದೆ.ಆದರೂ ನಿನ್ನ ಪ್ರೀತಿಯಿಂದ ದೂರವಿರಲು ಆಗ್ಲೇ ಇಲ್ಲ ನನಗೆ,ಅದರಲ್ಲೂ ಬೇರೆಯೊಬ್ಬನ ಜೊತೆಮದುವೆ..
 ನನಗೆ ಗೊತ್ತು ಕಣೋ ಹುಡುಗಾ !ನಿನ್ನ ಕಣ್ಣಲ್ಲಾಗಲೇ ನೀರು ಬರ್ತಿದೆಯೆಂದು.ಹೇಯ್ ಒರೆಸಿಬಿಡು ಅದನ್ನ,ನನ್ನಒಲವಿನಿಂದ ನೋಡ್ತಿದ್ದ ಕಣ್ಣಲ್ಲಿ ನೋವಿನ ಕಣ್ಣೀರು ಬರೋದು ನಂಗಿಷ್ಟವಿಲ್ಲ.ಬೇಗ ಒಮ್ಮೆ ನಕ್ಕು ಬಿಡು ನನ್ನಗೆಳೆಯಾ..ಹ್ಮಾಂಇದೇ ನಗುವಿನಲ್ಲಿ ನಾನು ಸದಾ ಇರ್ತಿನಿ ಕಣೋ.ಮತ್ತೆನಿಲ್ಲ ಎದೆಯಿಲ್ಲಾ ತುಂಬಾ ಉರಿ-ಉರಿಯಾಗ್ತಿದೆ.ನಿನ್ನ ನಗುವಿನಲ್ಲಿ ಸೇರಲು ಆದಷ್ಟೂ ಬೇಗ ಬರ್ತಿದಿನೇನೋ?ಬರಲಾ ಗೆಳೆಯಾ..ನಗ್ತಾ ಇರು... 
ನಿನ್ನಲ್ಲಿರುವ ನಿನ್ನ ಹುಡುಗಿ,
  ಮಾನಸ  "
ಪತ್ರವನ್ನೋದಿ ಮುಗಿಸಿದ ಕಾವ್ಯಳ ಕಣ್ಣಾಲಿಗಳು ತಿಲ್ಲಾನ ಹಾಡುತ್ತಿದ್ದರೇ,' ಬದುಕಿದ್ದಾಗ ಒಂದಾಗದ ವಿಧಿ ಅವರನ್ನುಸಾವಿನಲ್ಲಿ ಒಂದು ಮಾಡಿತಲ್ಲಎಂಬ ಮೂಕವೇದನೆಯೊಂದು ಮೌನದೊಡನೆ ತಾಳಹಾಕುತ್ತಿತ್ತು..
ಶುಭಶ್ರೀ ಭಟ್ಟ

No comments:

"ಗೋಟಡಕೆಗೆ ಸಿಕ್ಕ ಮಿಠಾಯಿ"

ಬಾಯಲ್ಲಿಟ್ಟರೆ ಕರಗುವ,ಕಲ್ಲುಸಕ್ಕರೆಗಿಂತ ಸಿಹಿಯಾದ,ಮೆದ್ದರೆ ಬಾಯೆಲ್ಲಾ ಕೆಂಗುಲಾಬಿಯಂತಾಗುವ 'ಬೊಂಬಾಯಿ ಮಿಠಾಯಿ' ಅಂದರೆ ನಮಗೆಲ್ಲಾ ಅದೇನೋ ಅಚ್ಚರಿ,ಕುತೂ...