ಮುದ್ದಾಗಿ ಕಚಗುಳಿಯಿಕ್ಕೊ ಅಲೆಗಳು
ಕಾಲ್ತಂಪಾಗಿಸೋ ಬೆಚ್ಚಗಿನ ನೀರು
ಕಣ್ಣೀರ ಒರೆಸುವ ತಿಳಿಯಾದ ತಂಗಾಳಿ
ಆದರೂ ನಿನ್ನ ಹುಡುಕುವ ತವಕ
ಈ ಜೀವನ ಮುಸ್ಸಂಜೆಯಲ್ಲಿ ||
ಅವಧಿ ಮುಗಿಯುವ ಮುನ್ನ
ನೀ ಧರೆಗಿಳಿಯ ಬಂದೆ
ರಕ್ತ-ಮಾಂಸದ ಮುದ್ದೆಯಾಗಿ
ನೀ ಜಾರಿ ಹೋದೆ
ಮತ್ತೆಂದೂ ಮರಳಿ ಬಾರದ ಲೋಕಕ್ಕೆ||
ಕೊಟ್ಟಂತೆ ಮಾಡಿ ಕಿತ್ತುಕೊಂಡ ಅವ
ನೂರಾರು ಕನಸ ಚೂರಾಸಿಗಿದ ಅವ
ಉತ್ತರವಿಲ್ಲದ ಪ್ರಶ್ನೆ ಹುಡುಕ ಹೊರಟೆ
ನಿನ್ನ ಹೆಜ್ಜೆ ಗುರುತು ಹಿಡಿದು
ಕಾಣದಿಹ ಅಜ್ನಾತ ಜಾಗಕ್ಕೆ||
-ಶುಭಶ್ರೀ ಭಟ್ಟ
No comments:
Post a Comment